ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಶೃದ್ದಾಂಜಲಿ
ಸಕಲೇಶಪುರ :2019 ನೇ ಸಾಲಿನ ಫೆಬ್ರವರಿ 14 ರಂದು ನಡೆದ ರಣಭೀಕರ ಸ್ಫೋಟದಲ್ಲಿ ಬಲಿಯಾದ ಸೈನಿಕರಿಗೆ ನಮನ ಸಲ್ಲಿಸಿ ಶೃದ್ದಾಂಜಲಿ ಅರ್ಪಿಸಲಾಯಿತು.
12 ಫೆಬ್ರವರಿ 2019 ರಂದು ಪುಲ್ವಾಮಾ ಮಾರ್ಗವಾಗಿ ತಮ್ಮ ಕರ್ತವ್ಯಕೆಂದು ತೆರಳುತ್ತಿದ್ದ CRPF ಸೈನಿಕರ ಮೇಲೆ ಭಯೋತ್ಪಾದಕರು RDX ಬಾಂಬ್ ಸ್ಪೋಟಿಸಿದಾಗ ಒಂದೇ ಬಸ್ ನಲ್ಲಿ ಇದ್ದ 41 ಜನರ ಶವ ಛಿದ್ರವಾಗಿತ್ತು.
ಸೈನಿಕರ ಆತ್ಮಕ್ಕೆ ಶಾಂತಿ ಕೋರಲೆಂದು ಇಂದು ಸಕಲೇಶಪುರದ ದೋಣಿಗಲ್ ವೃತ್ತದ ಬಳಿ ಪೂಜೆ ಸಲ್ಲಿಸಿ ಮೌನ ಆಚರಿಸಲಾಯಿತು.
ಇದೆ ಸಂದರ್ಭದಲ್ಲಿ ಮಾತಾಡಿದ ಹಿಂದೂ ಮುಖಂಡ ಕೌಶಿಕ್ ಹೆನ್ನಲಿ ಇಂದಿನ ಕಾಲಘಟ್ಟದ ಯುವಕರು ಪಾಶಿಮಾತ್ಯ ಸಂಸ್ಕೃತಿ ಕಡೆಗೆ ವಾಲುತಿದ್ದು ಅವರ ಮನಸ್ಸನ್ನು ದೇಶಭಕ್ತಿ ಕಡೆಗೆ ಸೆಳೆಯಬೇಕು ಎಂದು ತಿಳಿಸುತ್ತ 14 ಫೆಬ್ರವರಿ ಪ್ರೇಮಿಗಳ ದೀನ ಆಚರಣೆ ಮಾಡುವ ಬದಲು ಹುತಾತ್ಮ ದಿನ ಎಂದು ಆಚರಣೆ ಮಾಡೋಣ ಅಂತ ಕರೆಕೊಟ್ಟರು.
ಈ ಸಂದರ್ಭದಲ್ಲಿ. ಕ್ಯಾಮನಹಳ್ಳಿ ಪಂಚಾಯತಿ ಅಧ್ಯಕ್ಷರಾದ ಸಚಿನ್, ಹಾದಿಗೆ ಪಂಚಾಯತಿ ಸದಸ್ಯ ಆಕಾಶ್, ವಿನಯ್, ಜತಿನ್, ಗುರು, ಸಚಿನ್ ಬಾಳ್ಯಾಹಳ್ಳ, ದುಷ್ಯಂತ್
ಉಪಸ್ಥಿತಿ ಇದ್ದರು

