ಕಾರ್ಕಳ ಬಂಡಿ ಮಠದ ಬಳಿ ವಾಹನ ಚಾಲಕರಲ್ಲಿ ಆತಂಕ ಹುಟ್ಟಿಸಿದ್ದ ರಸ್ತೆ ಉಬ್ಬುಗಳಿಗೆ ಕಾರ್ಕಳ ಟೈಗರ್ಸ್ ಬಳಗದ ಸದಸ್ಯರು ಬಿಳಿ ಬಣ್ಣ ಬಳಿದಿದ್ದಾರೆ.
ಈ ರಸ್ತೆ ಉಬ್ಬುನಲ್ಲಿ ಬಹಳಷ್ಟು ಮಂದಿ ಅಪಘಾತಕ್ಕೆ ಒಳಗಾಗಿದ್ದರು. ರಸ್ತೆಯಲ್ಲಿ ಬರುವ ವಾಹನ ಸವಾರರಿಗೆ ಈ ಹಂಪ್ ನ ಬಗ್ಗೆ ತಿಳಿಯುತ್ತಲೇ ಇರುತ್ತಿರಲಿಲ್ಲ.
ವೇಗವಾಗಿ ಬರುವ ವಾಹನಗಳು ಈ ಹಂಪ್ ಗಮನಿಸದೆ ಮೇಲಕ್ಕೆ ಹಾರಿ ಬಹಳಷ್ಟು ಅಪಘಾತಗಳು ಸಂಭವಿಸಿದ್ದವು.
ಈ ಸಮಸ್ಯೆ ಗಮನಿಸಿ ಕಾರ್ಕಳ ಟೈಗರ್ಸ್ ಬಳಗದ ಗೋಪಾಲ್, ಸಂತೋಷ್ ಪ್ರಭು, ಸುರೇಂದ್ರ ನಾಯಕ್, ಸುನಿಲ್ ಜೈನ್, ಪ್ರಶಾಂತ್ ಆಚಾರ್ಯ, ಗಣೇಶ್ ಆಚಾರ್ಯ ಹಾಗು ಇನ್ನಿತರರು ಈ ಸಮಸ್ಯೆಯನ್ನು ತಾತ್ಕಾಲಿಕವಾಗಿ ಪರಿಹಾರ ಮಾಡಲು ಶ್ರಮ ವಹಿಸಿದ್ದಾರೆ.
previous post