Blog

ತೆಂಕಲ ಗೂಡು ಬ್ರಹನ್ಮಠದಲ್ಲಿ ಪುಣ್ಯ ಸ್ಮರಣೆ

ವರದಿ ರಾಣಿ ಪ್ರಸನ್ನ

ಮೇ 11 ಮತ್ತು 12ರಂದು ತೆಂಕಲಗೂಡು ಬೃಹನ್ಮಠದಲ್ಲಿ ಐದನೇ ವರ್ಷದ ಪುಣ್ಯಸ್ಮರಣೆ

ವಾಗ್ಯೂಷಣರತ್ನ ಲಿಂ.ಶ್ರೀ.ಷ.ಬ್ರ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪುಣ್ಯ ಸ್ಮರಣೆ, ಶ್ರೀ ಷ.ಬ್ರ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳವರ ಐದನೇ ವರ್ಷದ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ, 30ನೇ ವರ್ಷದ ಜನ್ಮ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾವೇಶ ಕಾರ್ಯಕ್ರಮ ನೆರವೇರಲಿದೆ.

ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಲೋಕಕಲ್ಯಾಣಾರ್ಥವಾಗಿ ಹೋಮ ಹವನ ಸಾಮೂಹಿಕ ಇಷ್ಟಲಿಂಗ ದೀಕ್ಷೆ ತೆಂಕಲಗೂಡು ಬೃಹನ್ಮಠ ಪ್ರಕಾಶನದಿಂದ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಉದ್ಘಾಟನೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನೆರವೇರಲಿದೆ.

ಏಪ್ರಿಲ್ 6 ಭಾನುವಾರದಂದು ಮಧ್ಯಾಹ್ನ 3 ಗಂಟೆಗೆ ಶ್ರೀಗಳ ಅಧ್ಯಕ್ಷತೆಯಲ್ಲಿ ಸಕಲ ಸದ್ಭಕ್ತ ಶಿಷ್ಯರ ಸಮ್ಮುಖದಲ್ಲಿ ಪ್ರಥಮ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಸದ್ಭಕ್ತರೆಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನ ನೀಡುವುದರ ಮುಖೇನವಾಗಿ ಕಾರ್ಯಕ್ರಮದ ರೂಪು ರೇಶೆಗಳನ್ನು ತಿಳಿಸಬೇಕು.ಹಾಗೂ ಕಾಶಿ ಸನ್ನಿಧಿಯವರು ಪ್ರಪ್ರಥಮ ಬಾರಿಗೆ ಯಸಳೂರು ಗ್ರಾಮಕ್ಕೆ ಆಗಮಿಸುತ್ತಿರುವುದರಿಂದ ಆ ಕಾರ್ಯಕ್ರಮದ ಸಕಲ ಸಿದ್ಧತೆಗಳನ್ನು ಹೇಗೆ ಮಾಡಿಕೊಳ್ಳಬೇಕು ಹಾಗೂ ಕಾರ್ಯಕ್ರಮದ ರೂಪರೇಷೆಗಳನ್ನ ಚರ್ಚಿಸುವುದು, ಈ ಸಭೆಯ ಉದ್ದೇಶವಾಗಿದೆ. ಸಕಲ ಸದ್ಭಕ್ತರೆಲ್ಲರೂ ಆಗಮಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಈ ಮೂಲಕ ಶ್ರೀ ಷ.ಬ್ರ ಚನ್ನ ಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದ್ದಾರೆ.

Related posts

ಹಾಸನಾಂಬ ಜಾತ್ರೆ – ಆಪ್ ಹಾಗೂ ಪೋಸ್ಟರ್ ಬಿಡುಗಡೆ

Bimba Prakashana

ಸಕಲೇಶಪುರದಲ್ಲಿ ರಕ್ತದಾನ ಶಿಬಿರ

Bimba Prakashana

ಹಾದಿಗೆ ಕಾಲೋನಿ ರಸ್ತೆಯ ಕಿರು ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ ಶಾಸಕರು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More