Blog

ಹೈನುಗಾರರ ಕರೆಗೆ ತುರ್ತು ಸ್ಪಂದನೆ ಮಾಡಿದ ಕುಮಾರ್ ನಾಯಕ್

ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ  ಪಶುಸಂಗೋಪನೆ ಸೂಪರ್ವೈಸರ್ ಕುಮಾರ್ ನಾಯಕ್

ಸಕಲೇಶಪುರ ತಾಲ್ಲೂಕಿನ ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಯೂರು ಗ್ರಾಮದ ಲೋಲಾಕ್ಷಿ ವೀರೇಶ್ ಅವರ ಮನೆಯ  ಎಮ್ಮೆಯು 7 ದಿನಗಳ ಹಿಂದೆ   ಗಂಡು ಕರುವಿಗೆ ಜನ್ಮ ನೀಡಿತ್ತು.    ಮದ್ಯ ರಾತ್ರಿಯ ಸಮಯದಲ್ಲಿ  ಆ ಎಮ್ಮೆಯ ಗರ್ಭಕೋಶ ಹೊರಗಡೆ ಬಂದಿದೆ . ಮುಂಜಾನೆಯೇ ಈ ವಿಷಯವನ್ನು ವಳಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ  ಪಶುಸಂಗೋಪನೆ ಸೂಪರ್ವೈಸರ್ ಅವರಿಗೆ ಕರೆ ಮಾಡಿ ತಿಳಿಸಲಾಗಿದೆ.

ಈ ಮಾಹಿತಿ ತಿಳಿದು ತಕ್ಷಣ  ಪಶುಸಂಗೋಪನೆ ಸೂಪರ್ವೈಸರ್ ಕುಮಾರ್ ನಾಯಕ್ ಮಾಲೀಕರಿಗೆ  ಧೈರ್ಯ ಹೇಳಿ   ನೀವು ಎಷ್ಟು ರಾತ್ರಿಗೆ ಹೇಳಿದರು ಬರುತ್ತೇನೆ ಯಾಕೆ ನೀವು ರಾತ್ರಿ ಯೆ ಹೇಳಲಿಲ್ಲ ಎಂದು ಮನೆಯವರಿಗೆ ಸಾಂತ್ವನ ಹೇಳಿ ಎಮ್ಮೆಗೆ ಚುಚ್ಚುಮದ್ದು ನೀಡಿ ಸತತವಾಗಿ  2 ಗಂಟೆ  ಹರ ಸಾಹಸ  ಪಟ್ಟು  ಎಮ್ಮೆಯ ಪ್ರಾಣವನ್ನು ರಕ್ಷಣೆ ಮಾಡಿದ್ದಾರೆ.

ಇವರ ಈ ತುರ್ತು ಸ್ಪಂದನೆಗೆ   ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ  ವಳಲಹಳ್ಳಿ ವೀರೇಶ್ ಹಾಗೂ ಕುಟುಂಬದವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

ಮಳಲಿಯಲ್ಲಿ ಚಿತ್ರ ಕಲಾ ಸ್ಪರ್ಧೆ

Bimba Prakashana

ಪತ್ನಿಯ ಕೊಲೆ ಮಾಡಿದ ಪತಿ

Bimba Prakashana

ಟೈಲ್ಸ್ ಪ್ರದೀಪ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More