Blog

ಕಸ್ತೂರಿ ರಂಗನ್ ವರದಿ ಜಾರಿಗೆ – ರಾಜ್ಯ ಸರಕಾರದ ಬಗ್ಗೆ ಸಿಮೆಂಟ್ ಮಂಜುನಾಥ್ ಆಕ್ರೋಶ

*ಕಸ್ತೂರಿ ರಂಗನ್ ವರದಿ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಜೊತೆ ಹಿಂದೂ ಮುಖಂಡ ರಘು ಸಕಲೇಶಪುರ ಬಾಗಿ..*

ಗುಂಡ್ಯ – ಕಸ್ತೂರಿ ರಂಗನ್ ವರದಿ ಜಾರಿಗೆ ಹಪತಪಿಸುತ್ತಿರುವ ಕರ್ನಾಟಕ ಸರ್ಕಾರ ನಡೆಯನ್ನು  ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುಂಡ್ಯ ಗ್ರಾಮದಲ್ಲಿ  ಹಲವಾರು ಸಂಘ ಸಂಸ್ಥೆಗಳ ಆಶ್ರಯದೊಂದಿಗೆ ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲೆ ಇವರು ಆಯೋಜಿಸಿದ್ದ ಕಸ್ತೂರಿ ರಂಗನ್ ವರದಿ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಭಾಗಿಯಾಗಿದ್ದರು.


           ಕಸ್ತೂರಿ ರಂಗನ್ ವರದಿ ನೆಪ ಇಟ್ಟುಕೊಂಡು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ನಡೆಸುತ್ತಿರುವ ದೌರ್ಜನ್ಯ ವಿರುದ್ಧ ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಗಳಿಂದ ಸಾವಿರಾರು ಜನ ಈ ಕಸ್ತೂರಿ ರಂಗನ್ ವರದಿ ವಿರುದ್ಧ ಭುಗಿಲೆದ್ದಿದ್ದರು.


            ಈ ಕಾರ್ಯಕ್ರಮದಲ್ಲಿ ಸಕಲೇಶಪುರ ತಾಲ್ಲೂಕಿನ ಕೆಲ ಗ್ರಾಮಗಳು ಕಸ್ತೂರಿ ರಂಗನ್ ವರದಿಗೆ ತುತ್ತಾಗುವುದರಿಂದ ಗ್ರಾಮಸ್ಥರಿಗೆ ತೊಂದರೆ ಆಗದಂತೆ ಸಕಲೇಶಪುರ ತಾಲೂಕಿನ ಪ್ರಥಮ ಪ್ರಜೆಯಾಗಿ ಶಾಸಕ ಸಿಮೆಂಟ್ ಮಂಜು ಸಹ ಭಾಗಿಯಾಗಿ ಅರಣ್ಯ ಇಲಾಖೆ  ದೌರ್ಜನ್ಯ. ಕಂದಾಯ ಇಲಾಖೆ ಭ್ರಷ್ಟಾಚಾರದ ವಿರುದ್ಧ ಕಿಡಿಕಾರಿದರು ಮುಂದಿನ ದಿನಗಳಲ್ಲಿ  ಕಸ್ತೂರಿ ರಂಗನ್ ವರದಿ ವಿರುದ್ಧ ಸಕಲೇಶಪುರ ತಾಲ್ಲೂಕಿನ ಸಹ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.


            ಕ್ಷೇತ್ರದ ಜನರಿಗಾಗಿ ಗುಂಡ್ಯದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಬೆಂಗಳೂರಿನಲ್ಲಿ ನಡೆದರೆ ಸಕಲೇಶಪುರ ಕ್ಷೇತ್ರದ ಸಾವಿರಾರು ಜನ ನನ್ನ ಆಶ್ರಯದಲ್ಲಿ ಭಾಗಿಯಾಗುತ್ತಾರೆ. ಕ್ಷೇತ್ರದ ಜನರಿಗಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.


              ಈ ವೇದಿಕೆಯಲ್ಲಿ ಹಿಂದೂ ಮುಖಂಡ ರಘು ಸಕಲೇಶಪುರ ಸೇರಿದಂತೆ ಮಲೆನಾಡು ಜನಹಿತ ರಕ್ಷಣಾ ಸಮಿತಿಯ ಸಂಚಾಲಕ ಶಿರಾಡಿ ಕಿಶೋರ್. ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ. ಶಾಸಕ ಗುರುರಾಜ್ ಗಂಟಿಹೊಳೆ. ಸಂಜೀವ ಮಠಂದೂರು. ಸೇರಿದಂತೆ ಅನೇಕ ಸಮುದಾಯಗಳ ಗಣ್ಯರು. ಧರ್ಮಗುರುಗಳು ಭಾಗಿಯಾಗಿದ್ದರು.

Related posts

2025ರಲ್ಲಿ ಒಳಿತಾಗಲಿ

Bimba Prakashana

ಆಲೂರುನಲ್ಲಿ ಪ್ರತಿಭಾ ಪುರಸ್ಕಾರ

Bimba Prakashana

ಕಾಡು ಮನೆ ಪ್ರಕಾಶ್ ನಿಧನ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More