ರಾಮದೂತ ಹಿಂದೂ ಮಹಾಗಣಪತಿ ಸಮಿತಿ ವತಿಯಿಂದ ಕೆಂಪೇಗೌಡ ಪುತ್ಥಳಿಗೆ 5555 ಕಾಣಿಕೆ ಸಮರ್ಪಣೆ
ಸಕಲೇಶಪುರ:-
ಸಕಲೇಶಪುರದಲ್ಲಿ ನಿರ್ಮಾಣವಾಗುತ್ತಿರುವ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದು ದಿನಾಂಕ 14.02.25 ರಂದು ಪುತ್ಥಳಿ ಅನಾವರಣವನ್ನು ಪೂಜ್ಯ ಶ್ರೀ ನಿರ್ಮಲಾನಂದ ಸ್ವಾಮೀಜಿ ಹಾಗೂ ಶಂಭುನಾಥ ಸ್ವಾಮೀಜಿಗಳ ದಿವ್ಯ ಹಸ್ತದಲ್ಲಿ ಉದ್ಘಾಟನೆ ಮಾಡಲಿದ್ದಾರೆ.
ರಾಮದೂತ ಹಿಂದೂ ಮಹಾಗಣಪತಿ ಸಮಿತಿ ಸಕಲೇಶಪುರದಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದು ಸಮಾಜದಿಂದ ಸಂಗ್ರಹ ಮಾಡಿದ ಹಣ ಉಳಿಸಿ 5555 ಐದು ಸಾವಿರದ ಐದುನೂರ ಐವತೈದು ರೂಪಾಯಿಗಳನ್ನ ನೀಡಲಾಗಿದೆ ಎಂದು ಸಂಚಾಲಕ ಪ್ರದೀಪ್ ತಿಳಿಸಿದ್ದಾರೆ.
ಕಾಣಿಕೆಯನ್ನ ಹಾಸನ ಜಿಲ್ಲಾ ಅದಿಚುoಚಿನಗಿರಿ ಮಠದ ಸ್ವಾಮೀಜಿಗಳು
ಶ್ರೀ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಗಳು, ಒಕ್ಕಲಿಗ ಸಂಘದ ಅಧ್ಯಕ್ಷರಾದ ವಿಶ್ವನಾಥ, ಕಾರ್ಯದರ್ಶಿ ಮರಗುತ್ತೂರು ಉಮೇಶ್ ಸರ್ವ ಸಸಸ್ಯರು ಇದ್ದರು