Blog

ಇಂಡಿಯಾ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಆರ್ವಿ

ವರದಿ ರಾಣಿ ಪ್ರಸನ್ನ

ಇಲ್ಲೊಂದು ಸರ್ವತೋಮುಖ ಪ್ರತಿಭೆ ಅತ್ಯಂತ ಕಿರಿಯ ವಯಸ್ಸಿನಲ್ಲಿ ಇಂಡಿಯಾ. ಬುಕ್ ಆಫ್ ರೆಕಾರ್ಡ್ ಸ್ಪರ್ದೆಯಲ್ಲಿ ಭಾಗವಹಿಸಿ ” Super  Talented  Kid With Outstanding Memory ” ಎಂದು ಬಿರುದು ಪಡೆದಿರುವ   ಆಚಂಗಿ ನಿವಾಸಿ ಆರ್ವಿ.

ಈ ಪ್ರತಿಭೆಯ ತಾಯಿ  ವಿಜಯಲಕ್ಷ್ಮಿ  ಹಾಗು ತಂದೆ ಕಾರ್ತಿಕ್ ಆಚಂಗಿ ನಿವಾಸಿಗಳು .

ಆರ್ವಿಯ ಕಲೆಯನ್ನು ಗುರುತಿಸಿ ಬೆಂಗಳೂರಿನ ” ಚಿತ್ರಸಂತೆ ” ತಂಡವು ಇವಳಿಗೆ “ರಾಜ್ಯೋತ್ಸವ ಪುರಸ್ಕಾರ ” ನೀಡಿ ಗೌರವಿಸಿದೆ. 49 ಜನ ಹಿರಿಯ ವಿವಿಧ ಸಾಧಕರ ಪೈಕಿ ಅತ್ಯಂತ ಕಿರಿಯ ಸಾಧಕಿ ಇವಳಾಗಿರುತ್ತಾಳೆ. ಹಾಗೆ ಇವಳು ಹನುಮ ಜಯಂತಿ ಹಾಗೂ 4ನೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕಲೆ ಪ್ರದರ್ಶನ ನೀಡಿ ಸನ್ಮಾನ ಮಾಡಿರುತ್ತಾರೆ . ಹಾಸನದಲ್ಲಿ ನಡೆದ ” ಗಮಕ ನಮನ  – ಕವಿ ನಮನ ” ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಮಾಡಲಾಗಿದೆ.

ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ಇವಳ ಕಲೆ ಗಮನಿಸಿ ಇವಳಿಗೆ  ವೇದಿಕೆ ಕಲ್ಪಿಸಿ ಕೊಡಲಾಗಿತ್ತು.

ಮಾರ್ಚ್ ನಲ್ಲಿ ಹಾಸನದಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ  ಸಹ ಭಾಗಿಯಾಗಲಿದ್ದಾಳೆ.

ಈ ಮಗು “ಇಂಡಿಯಾ ಬುಕ್ ಆಫ್  ರೆಕಾರ್ಡ್ ”  ಪಡೆದದ್ದಕ್ಕೆ ಈಕೆಯ ಕಲೆಯನ್ನು  ಗುರುತಿಸಿ ಸಕಲೇಶಪುರದ ಶಾಸಕರಾದ ಸಿಮೆಂಟ್ ಮಂಜು  ಹಾಗು ಭಜರಂಗದಳ ಹಾಗು ರಘುಜಿ ಅವರು  ಗಣೇಶನ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಿರುತ್ತಾರೆ.

ಈ ಮಗುವಿನ  ಪ್ರತಿಭೆ  ಏನು ಹಾಗಾದ್ರೆ ಒಂದು ವರ್ಷ  ಹನ್ನೊಂದು ತಿಂಗಳಿನಲ್ಲಿ  ಏನು ಸಾಧನೆ ಮಾಡಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು ಇಲ್ಲಿದೆ ನೋಡಿ ಈ ಮಗುವಿನ ಪ್ರತಿಭೆ ,  ತನ್ನನ್ನು ತಾನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು, ಭಗವದ್ಗೀತೆ , ದೇವರ ಶ್ಲೋಕಗಳು, ದೇವರ ನಾಮಗಳು , ಭರತ ನಾಟ್ಯ ಮುದ್ರೆಗಳು, 400ಕ್ಕೂ ಹೆಚ್ಚು ವಸ್ತುಗಳನ್ನು ಗುರುತಿಸುವುದು,  ಕವಿಗಳ ಹೆಸರು  ಹಾಗು  ಕಾವ್ಯ ನಾಮಗಳು, ದಿಕ್ಕುಗಳನ್ನು  ಗುರುತಿಸುವುದು, ಹಳೇ ಗನ್ನಡ,  ಕನ್ನಡ , ಹಾಗು ಇಂಗ್ಲಿಷ್ ನಲ್ಲಿ ಹೇಳುವಳು, , ಭಜನೆಗಳು, ಹನುಮಾನ್ ಚಾಲಿಸಾ , ಹಾಗೆಯೇ ಮೆಡಿಕಲ್ ಮತ್ತು ಹಾಸ್ಪಿಟಲ್ ನಲ್ಲಿ ಬಳಸುವ ವಸ್ತುಗಳ ಹೆಸರು , ಕನ್ನಡದ ಮಾಸಗಳು , ಇಂಗ್ಲಿಷ್ ನ ತಿಂಗಳು, ವಾರದ ದಿನಗಳು, ಕನ್ನಡ ಹಾಗು ಇಂಗ್ಲಿಷ್ ನಲ್ಲಿ ಹೇಳುತ್ತಾಳೆ, ದೇಹದ ಭಾಗಗಳು, ಪ್ರಾಣಿಗಳು ಹಾಗು ಪಕ್ಷಿ ಹಣ್ಣುಗಳ ಹೆಸರನ್ನು ಹೇಳುತ್ತಾಳೆ. ಯೋಗಾಸನ, ಜಿಲ್ಲೆಗಳ ಹೆಸರು , ಕನ್ನಡದ ಪ್ರಥಮಗಳು, ಜನರಲ್  ನಾಲೆಡ್ಜ್ ಪ್ರಶ್ನೆಗಳಿಗೆ  ಉತ್ತರಿಸುವ ಕೆಲವೊಂದು ಸಿನಿಮಾ ಹಾಡುಗಳನ್ನು  ಹಾಡುವುದು ಮತ್ತು ನೃತ್ಯ ಮಾಡುವುದು , ಪಜಲ್ ಸಾಲ್ವ್ ಮಾಡುವುದು.

ಇವರ ತಾಯಿ ವಿಜಯಲಕ್ಷ್ಮಿ ಈಕೆ ಪ್ರತಿಭಾನ್ವಿತಳಾಗಲಿಕ್ಕೆ  ಅವರ  ತಾಯಿಯ ಕೊಡುಗೆ ಹೆಚ್ಚಿನದ್ದಿದೆ ಅವರು  ಮಗುವಿಗೆ  ಮೊಬೈಲ್ ಅನ್ನು ನೀಡದೆ ಇತರಹದ ಚಟುವಟಿಕೆಗಳಲ್ಲಿ ತೊಡಗಿರುವುದು.

ಮುಂದಿನ ಈ ಮಗುವಿನ ಭವಿಷ್ಯವು ಈ ನಮ್ಮ ಸಕಲೇಶಪುರಕ್ಕೆ ಹೆಸರು ತರುವಂತಾಗಲಿ ಇಡೀ ನಮ್ಮ ಸಕಲೇಶಪುರದ ಹೆಸರನ್ನು ಎಲ್ಲೆಡೆ ಹರಡಲಿ.

Related posts

ಗೂಂಡಾಗಳ ಮೇಲೆ ಕ್ರಮ ಕೈ ಗೊಳ್ಳಿ

Bimba Prakashana

ಗಣಿಗಾರಿಕೆ ವಿರುದ್ಧ ಹೋರಾಟ

Bimba Prakashana

ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆದ ಆಲೂರು ತಾಲೂಕು ವಿದ್ಯಾರ್ಥಿಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More