ಮಳಲಿ ಗ್ರಾಮದ ಹಿಂದೂ ರುದ್ರಭೂಮಿ ಧ್ವಂಸ ಮಾಡಿ ರಸ್ತೆ ನಿರ್ಮಾಣ.
ಸಕಲೇಶಪುರ – ಫೆಬ್ರವರಿ ತಿಂಗಳಲ್ಲಿ ತಬ್ಬಲಿಕೆ ಜಮಾತ್ ನಡೆಸಲು ಮಾಡಿರುವ ಮಳಲಿ ಪಂಚಾಯತಿ ವ್ಯಾಪ್ತಿಗೆ ಸೇರಿದ ಭೂಮಿಯನ್ನು ಯಾವದೇ ಅನುಮತಿ ಪಡೆ ಯದೇ JCB ಬುಲ್ದೆಝರ್ ತಂದು 10 ಎಕ್ರೆಗು ಹೆಚ್ಚು ಭೂಮಿಗೆ ಮಣ್ಣು ತುಂಬಿಸಿ ಜೊತೆಗೆ ಹಿಂದೂ ರುದ್ರ ಭೂಮಿಯನ್ನು ಧ್ವoಸ ಮಾಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಾಹನ ನಿಲುಗಡೆಗೆಂದು ರಾಷ್ಟ್ರೀಯ ಹೆದ್ದಾರಿಯಿಂದ ತಿರುಗಲು ಪೊಲೀಸ್ ಅನುಮತಿ ಪಡೆಯದೇ ಯಾವುದೇ ಸುರಕ್ಷತೆಗೆ ಒತ್ತು ಕೊಟ್ಟಿರುವುದಿಲ್ಲ.


ಮಳಲಿ ಗ್ರಾಮದವರಿಗಾಗಿ ಮೀಸಲು ಇರುವ ರುದ್ರಭೂಮಿಯನ್ನ ದುರುದ್ದೇಶಪೂರ್ವಕವಾಗಿ ಸ್ಮಶಾನ ಎಂದು ಗೊತ್ತಿದ್ದರೂ ಸಹ ಸಾವಿರಾರು ವರ್ಷದಿಂದ ಶವಸಂಸ್ಕಾರ ಮಾಡಿಕೊಂಡು ಬರುತ್ತಿರುವ ಜಾಗವನ್ನು ಹಾಗು ದೇವರ ಕಲ್ಲನ್ನು ವಿರೂಪಗೊಳಿಸಲು ಹುನ್ನಾರ ಮಾಡಿರುವ ತಬ್ಬಲಿಕೆ ಜಮಾತ್ ಸಮಿತಿ ವಿರುದ್ಧ ಮತ್ತು ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದಿರುವ JCB ಯಂತ್ರ ಜಪ್ತಿ ಮಾಡಬೇಕು ಮತ್ತು ಚಾಲಕನ ಮೇಲೆ 153/A
ಅಡಿ ಕೇಸ್ ದಾಖಲಿಸಿ ಬಂಧನ ಮಾಡಬೇಕು ಎಂದು ಆಗ್ರಹಿಸುತ್ತೇವೆ.