Blog

ಕಸಬಾ ಹೋಬಳಿ ಬೆಳೆಗಾರರ ಸಂಘದ ಮಾಸಿಕ ಸಭೆ

ವರದಿ ರಾಣಿ ಪ್ರಸನ್ನ

ಕಸಬಾ ಹೋಬಳಿ ಬೆಳೆಗಾರರ ಸಂಘ(ರಿ.)ದ 2024-25 ನೇ ಸಾಲಿನ ಕಾರ್ಯಕಾರಿ ಮಂಡಳಿಯ 18 ನೇ ಮಾಸಿಕ ಸಭೆಯು ಪ್ರಸನ್ನಕುಮಾರ್ ಬಿ.ಡಿ, ಅಧ್ಯಕ್ಷರು, ಕ.ಹೋ.ಬೆ.ಸಂಘ ಇವರ ಅಧ್ಯಕ್ಷತೆಯಲ್ಲಿ ಹೆಚ್.ಡಿ.ಪಿ.ಎ ಸಭಾಂಗಣ, ಸಕಲೇಶಪುರ ಇಲ್ಲಿ ಇಂದು 17-12-2024 ರಂದು ನಡೆಯಿತು.

ಪ್ರಾರ್ಥನೆ ರೈತಗೀತೆಯ  ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ನಂತರ ಅಗಲಿದ ಗಣ್ಯರಿಗೆ ನಮನ ಸಲ್ಲಿಸಿ ನಂತರ ಗ್ರಾಮ ಮಟ್ಟದ ಬೆಳೆಗಾರರ ಸಮಸ್ಯೆಗಳನ್ನು ಆಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಹೊಸ ವರ್ಷದ 2025ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ನಂತರ ಅಗಲಿದ ಗಣ್ಯರಿಗೆ ನಮನ ಸಲ್ಲಿಸಿ ಸಭಾ ನೋಟೀಸು ಓದಿ ದಾಖಲಿಸಿದರು
ಕೆ.ಜಿ.ಎಫ್ ಹಾಗೂ ಹೆಚ್.ಡಿ.ಪಿ.ಎ ಯ ಮಾಸಿಕ ಸಭೆಯಲ್ಲಿ ನೆಡೆದ ಚರ್ಚೆಗಳನ್ನ ತಿಳಿಸಲಾಯಿತು ದಿನ ದಿನದ ಕಾಫಿ ಮಾರುಕಟ್ಟೆಯಲ್ಲಿ ಬಾರೀ ದರ ವ್ಯತ್ಯಾಸ ಬಹು ಕಷ್ಟ-ಕಷ್ಟ, ಮಾರುವ ನಿರ್ಧಾರ ಏನು ಎತ್ತ ?- ಶ್ರೀ ಹೆಚ್.ಎಸ್. ಧರ್ಮರಾಜ್, ಗೀತಾ ಎಸ್ಟೇಟ್ ಮತ್ತು ಟ್ರೇಡಿಂಗ್ ಇವರು ಸುದೀರ್ಘವಾದ ಚರ್ಚೆಯ ಮೂಲಕ ತಿಳಿಸಿಕೊಟ್ಟರು.

ನಂತರ ಲಲಿತ  ಕಲೆಗಳಲ್ಲಿ ರಾಜ್ಯ ಮಟ್ಟಕ್ಕೆ ಬಾಲ  ಭವನದಿಂದ ಆಯ್ಕೆಯಾದ ಆರ್ನ ಮೇಗರಾಜ್  ಅವರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹೆಚ್ ಎಸ್ ಧರ್ಮರಾಜು, ಹೆಚ್ ಎಂ ವಿಶ್ವನಾಥ್ ಮಾಜಿ ಶಾಸಕರು ,  ಬಿ.ಡಿ.ಪ್ರಸನ್ನಕುಮಾರ್ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಸುಬ್ರಹ್ಮಣ್ಯ , ಗೌರವ ಕಾರ್ಯದರ್ಶಿಗಳು, ಮಹೇಶ್, ಉಪಾಧ್ಯಕ್ಷರು, ಮೇಘರಾಜ ಕೆ.ವಿ.,  ರಾಕೇಶ್ ಎನ್ .ಡಿ. ಖಜಾಂಚಿ ,  ಮಾಜಿ ಅಧ್ಯಕ್ಷರು ಉದಯ್ ಕುಮಾರ್ ಉಪಸ್ಥಿತರಿದ್ದರು

Related posts

ಸಕಲೇಶಪುರದಲ್ಲಿ ದಿವ್ಯ ಬ್ರಹ್ಮ ರಥೋತ್ಸವ

Bimba Prakashana

ಡಾ. ಸಾಗರ್ ಜಾನೇ ಕೆರೆಯವರಿಗೆ ಸಾಲು ಮರದ ತಿಮ್ಮಕ್ಕ ಗ್ರೀನರಿ ಅವಾರ್ಡ್

Bimba Prakashana

ಬೈರಾ ಪುರ ಶಾಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More