Blog

ಜೇನು ಪೋಷಕರ ಸಹಕಾರ ಸಂಘದ ಅಧ್ಯಕ್ಷರಾಗಿ ಜೈ ಮಾರುತಿ ದೇವರಾಜ್

ಜೇನುಪೋಷಕರ ಸಹಕಾರ ಸಂಘ: ಜೈ ಮಾರುತಿ ದೇವರಾಜ್ ಹ್ಯಾಟ್ರಿಕ್ ಅಧ್ಯಕ್ಷ

ಸಕಲೇಶಪುರ:
ಸಕಲೇಶಪುರ ತಾಲ್ಲೂಕು ಜೇನುಪೋಷಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮೂರನೇ ಬಾರಿಗೆ ಜೈ ಮಾರುತಿ ದೇವರಾಜ್ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ ಜೈ ಮಾರುತಿ ದೇವರಾಜ್ ಅಧ್ಯಕ್ಷರಾಗಿ ಮತ್ತು ಎಚ್.ಎಸ್. ಕೃಷ್ಣೆಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಜೈ ಮಾರುತಿ ದೇವರಾಜ್ ಅವರು, “ನನ್ನನ್ನು ಮೂರನೇ ಬಾರಿಗೆ ಆಯ್ಕೆ ಮಾಡಲಾಗಿದೆ. ಇದರಿಂದ ನನ್ನ ಜವಾಬ್ದಾರಿ ಬಹಳಷ್ಟು ಹೆಚ್ಚಾಗಿದೆ. ಸಹಕಾರ ಸಂಘವನ್ನು ಇನ್ನಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವೆ,” ಎಂದು ಹೇಳಿದರು.

“ಇತ್ತೀಚೆಗೆ ಜೇನುಹುಳಗಳ ಸಂತತಿ ಕಡಿಮೆಯಾಗಿದೆ. ಇದರಿಂದ ಸ್ಥಳೀಯವಾಗಿ ಜೇನು ಉತ್ಪಾದನೆ ಕುಂಠಿತವಾಗಿದೆ. ಆದ್ದರಿಂದ ಹೊರ ರಾಜ್ಯಗಳಿಂದ ಜೇನು ತರಿಸಿ, ಸಂಸ್ಕರಣೆ ಮಾಡಿ ವಿತರಿಸಲಾಗುತ್ತಿದೆ,” ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಎಮ್. ವಿಶ್ವನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts

ಮಲೆನಾಡು ರಕ್ಷಣೆ ಸೇನೆಯ ಹೋರಾಟ

Bimba Prakashana

ಡಾ. ಅವರೇ ಕಾಡು ವಿಜಯ ಕುಮಾರ್ ಗೆ ರಾಜ್ಯ ಪ್ರಶಸ್ತಿ

Bimba Prakashana

ಸಕಲೇಶಪುರದಲ್ಲಿ ಭೂ ಮಾಫಿಯಾ ವಿರುದ್ಧ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More