ವರದಿ ರಾಣಿ ಪ್ರಸನ್ನ
ಶ್ರೀ ಕ್ಷೇತ್ರ ಸುತ್ತೂರು ಮಠದ ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ 31.12.2024 ಮಂಗಳವಾರ ಬೆಳಿಗ್ಗೆ 11.00 ಗಂಟೆಗೆ ಸಕಲೇಶಪುರದ ಶ್ರೀ ಸಕಲೇಶ್ವರಸ್ವಾಮಿ ದೇವಸ್ಥಾನದ ಬಳಿ 2025 ರ ಸುತ್ತೂರು ಜಾತ್ರಾ ಪ್ರಚಾರ ರಥವನ್ನು ಶ್ರೀ ಮಲೆನಾಡು ವೀರಶೈವ ಸಮಾಜ ಅಂಗ ಸಂಸ್ಥೆಯ ಸರ್ವ ಸದಸ್ಯರು ಸ್ವಾಗತಿಸಿದರು.
ನಂತರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು , ಹಾಗೆಯೇ ಸುತ್ತೂರು ಮಠ ಜಾತ್ರೆಯ ಕರ ಪತ್ರ ಹಂಚಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರು ಧರ್ಮಪ್ಪ , ಬಿ ಡಿ ಬಸವಣ್ಣ , ವಿದ್ಯಾಶಂಕರ್ , ಹೆಚ್ ಎನ್ ದೇವರಾಜ್ , ಕಾರ್ಯದರ್ಶಿ ಯಡಹಳ್ಳಿ ಮಂಜುನಾಥ್, ಮಹಿಳಾ ವೇದಿಕೆ ಅಧ್ಯಕ್ಷರು ಕೋಮಲ , ಗಾಯಿತ್ರಿ ಮುರುಗೇಶ್, ಯುವ ಅಧ್ಯಕ್ಷರು, ಶಶಿಕುಮಾರ್ , ಕಾರ್ಯದರ್ಶಿ ಮಳಲು ಸ್ವಾಮಿ ಉಪಸ್ಥಿತರಿದ್ದರು.



