Blog

ಪತ್ರಕರ್ತ ನಿಧನ

ಆಲೂರು: ಹಿರಿಯ ಪತ್ರಕರ್ತ, ಬರಹಗಾರ, ಚಿಂತಕ
ಸುರೇಶ್ ಗುರುವಾರ ಬೆಳಗ್ಗೆ ಅನಾರೋಗ್ಯದ ಕಾರಣ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರಿಗೆ 52ವರ್ಷ ವಯಸ್ಸಾಗಿತ್ತು.

ಹಾಸ್ಯಕಲಾವಿದ ಹಳೆ ಆಲೂರಿನ ನಾಗರಾಜ್ ಮತ್ತು ಸರೋಜ ಎಂಬ ದಂಪತಿಯ ಪುತ್ರರಾಗಿದ್ದ ಸುರೇಶ್ ಹಲವು ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ, ಅಲ್ಲದೆ ಆಲೂರು ತಾಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಆಲೂರುಮಿತ್ರ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಸೇವೆ ಸಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಇವರು ರಾಜ್ಯ ಪ್ರಶಸ್ತಿ ಪುರಸ್ಕೃತರು ಕೂಡ ಆಗಿದ್ದರು, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಇವರು ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು  ಇವರ ನಿಧನಕ್ಕೆ ತಾಲ್ಲೂಕು ಮತ್ತು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ಸೂಚಿಸಿದೆ.ಇವರ ಅಂತ್ಯಕ್ರಿಯೆಯನ್ನು ಸ್ವಗ್ರಾಮವಾದ ಹಳೇ ಆಲೂರಿನಲ್ಲಿ ನೆರವೇರಿಸಲಾಯಿತು.

Related posts

ಎಲ್ಲರಿಗೂ ಒಳಿತಾಗಲಿ

Bimba Prakashana

ಉದ್ಯೋಗ ಮಾಹಿತಿ

Bimba Prakashana

ಸಕಲೇಶಪುರದಲ್ಲಿ 1 ರೂಪಾಯಿಗೆ ಟೀ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More