Blog

ಹಸುವಿನ ಮೇಲೆ ಚಿರತೆ ದಾಳಿ

ವರದಿ : ನವೀನ್ ಬೈರಾ ಪುರ

ಆಲೂರು: ತಾಲ್ಲೂಕಿನ ಮಗ್ಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಪುರ ಗ್ರಾಮದ ರೈತ ರಾಜೇಗೌಡ ಮನೆಯ ಕೊಟ್ಟಿಗೆಯಲ್ಲಿದ್ದ ಗರ್ಭಿಣಿ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ತಿಂದು ಹೋಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಸೋಮವಾರ ಹಸುವಿನ ಮಾಲೀಕ ರಾಜೇಗೌಡ
ಮಲಗುವ ಮುನ್ನ ಮೇವು ಹಾಕಿ ಮಲಗಿದ್ದರು. ಎಂದಿನಂತೆ ಮಂಗಳವಾರ ಮುಂಜಾನೆ ಎದ್ದು ಕೊಟ್ಟಿಗೆ ನೋಡಿದಾಗ ಹಸು ಮೃತಪಟ್ಟಿರುವುದು ಕಂಡುಬಂದಿದೆ. ನಂತರ ಚಿರತೆ  ದಾಳಿಗೆ ಹಸು ಬಲಿಯಾಗಿರುವುದು ಖಚಿತವಾಗಿ ತಿಳಿದಿದ ಕೂಡಲೇ ಕುಟುಂಬಸ್ಥರ ಆಕ್ರಾನಂದ ಮುಗಿಲುಮುಟ್ಟಿದೆ.



ಕಳೆದ ಹಲವು ತಿಂಗಳಿಂದ ಚಿರತೆ ಓಡಾಡುತ್ತಿರುವುದು ರೈತರ ಗಮನಕ್ಕೆ ಬಂದಿತ್ತು. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈಗ ಕೂಲಿ ಮಾಡುವ ರೈತರೊಬ್ಬರ ಬೆಲೆ ಬಾಳುವ ಹಸು ಬಲಿಯಾಗಿದೆ  ಗ್ರಾಮಸ್ಥರು ಆರೋಪಿಸಿದ್ದಾರೆ.

Related posts

ನಾಪತ್ತೆ

Bimba Prakashana

ಸಕಲೇಶಪುರದಲ್ಲಿ ಸಾಹಿತ್ಯ ಸಮ್ಮೇಳನ

Bimba Prakashana

ಹುಟ್ಟು ಹಬ್ಬದ ಶುಭಾಶಯಗಳು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More